Saturday 1 December 2012

ಇವರು ಜೋಕರ್ ಅಲ್ಲ!


ಆಳ್ವಾಸ್ ನುಡಿಸಿರ ವಿವಿಧ ಆಕರ್ಷಣೆಯ ಕೇಂದ್ರಬಿಂದು. ನುಡಿಸಿರಿಯ ಛಾವಡಿಯ ಒಳ ಪ್ರವೇಶ ಧ್ವಾರದಿಂದ ಪ್ರಾರಂಭಿಸಿ ಎಲ್ಲಿನೋಡಿದರಲ್ಲಿ ಕಣ್ಣಿಗೆ ಹಬ್ಬ ಕೊಡುವುದು ಭಿನ್ನತೆ. ಅದೇ ನುಡಿಸಿರಿಯ ಐಸಿರಿ. ಈ ಸಲದ ನಡಿಸಿರಯಲ್ಲೂ ಭಿನ್ನತೆ ಛಾವಡಿಯ ಬಾಗಿಲಲ್ಲೇ ಸ್ವಾಗತಿಸುತಿತ್ತು. ವೈಶಿಷ್ಟ್ಯಕ್ಕೆ ಹೆಸರು ಪಡೆದಿತ್ತು. ನುಡಿಸಿರಿಯ ಗತ್ತಿಗೆ ಕಲಶವಾಗಿ ಕೊಡಿ ಏರಿತ್ತು. ಹೌದು ಸಾವಿರಾರು ಜನರ ಆಕರ್ಷಣೆಯ ಕೇಂದ್ರಬಿಂದು ನುಡಿಸಿರಿಯ ಛಾವಡಿಯಾಗಿತ್ತು. ಅದಕ್ಕೆಲ್ಲಾ ಕಾರಣ ನುಡಿಸಿರಿಯ ಗತ್ತಿನ ನಾಯಕ.
ಆಳ್ವಾಸ್ ನುಡಿಸಿರಿ ಆಳ್ವಾಸ್ ವಿರಾಸತ್ ಹೀಗೆ ಆಳ್ವಾಸ್ನ ಹಬ್ಬ ಬಂದರೆ ಸಾಕು ಅಲ್ಲಿಯ ಹಬ್ಬಕ್ಕೆ ಮೆರುಗು ನೀಡಿ ಹಬ್ಬದ ಖುಷಿ ಇನ್ನಷ್ಟು ಹೆಚ್ಚಿಸಲು ಜೋಕರ್ನಂತೆ ಕಾಣುವ ಒಬ್ಬ ವ್ಯಕ್ತಿಯ ಆಗಮನವಾಗಲೇ ಬೇಕು. ಅವರು ಬೇರ್ಯಾರೂ ಅಲ್ಲ ಮಡಬಿದಿರೆಯ ಆಳ್ವಾಸ್ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ 52 ಹರೆಯದ ರಾಧಾಕೃಷ್ಣ ನಾಯ್ಕ್. ತನ್ನ ಅಜಾನುಬಾಹು ದೇಹ, ವಿಚಿತ್ರ ವೈಖರಿ, ಎಲ್ಲರನ್ನೂ ತನ್ನತ್ತ ಸೆಳೆಯುವ ನಗು ಮುಖ ಎಲ್ಲವೂ ಜನರನ್ನು ಕ್ಷಣ ಮಾತ್ರದಲ್ಲಿ ಸೆಳೆದು ಅಲ್ಲೇ ಗುಂಪುಗಟ್ಟಿ ಮಿರಿಮಿರಿ ನೋಡುವಂತೆ ಮಾಡುತ್ತದೆ.
ದುಂಡಗಿನ ಟೋಪಿ, ಕಪ್ಪನೆಯ ಕೋಲಿಂಗ್ ಗ್ಲಾಸ್, ತಲೆ ಸುತ್ತಾ ಪಟ್ಟಿ, ಉದ್ದ ಕೂದಲು, ಆಕರ್ಷಕ ಕರ್ಣಕುಂಡಲ ಫ್ರೆಂಚ್ ಗಡ್ಡ, ಕೈಗ್ಲೌಸ್ ಹೀಗೆ ಚಿತ್ರ ವಿಚಿತ್ರ ವೇಷಭೂಷಣಗಳಂದಿಗೆ ಸೆಕ್ಯೂರಿಟಿ ಗಾರ್ಡ್ ಧಿರಿಸು ಧರಿಸಿ ನನ್ನ ಸ್ಟೈಲು ಬೇರೇನೇ, ನನ್ನ ಲುಕ್ಕು ಬೇರೇನೆ, ಎಂದು ಹಾಡಿ ನಗಿಸುವ ಇವರ ಬದುಕಲ್ಲಿ ದುಖ:ದ ಕಾಮರ್ೋಡವಿದೆ. 
ರಾಧಾಕೃಷ್ಣ ನಾಯ್ಕ್ ಅವರ ಉಪನಾಮ ಆರ್.ಕೆ. ನಾಯಕ್. ಮೂಲತಃ ಅವರು ಕಾರ್ಕಳದ ಬಂಗ್ಲೆಗುಡ್ಡೆಯವರು. ಕೆಲ ವರ್ಷಗಳ ಹಿಂದೆ ಹೈದರಬಾದ್ನ ಹೋಟೇಲ್ ಒಂದರಲ್ಲಿ ಅವರ ದುಡಿಮೆಯಾಗಿತ್ತು. ಅದೇ ಸಂದರ್ಭದಲ್ಲಿ ಕೆಲ ಸಿನಿಮಾಗಳಲ್ಲಿ ಖಳನಾಯಕನ ಪಾತ್ರಕ್ಕೆ ಸಹಾಯಕ ಪಾತ್ರಧಾರಿಯಾಗಿ ನಟಿಸಿದ್ದರು. ದುರಾದೃಷ್ಟವಶಾತ್ ಖಳನಾಯಕನ ಪಾತ್ರಕ್ಕೆ ಬೇಕಾದ ಸಾಹಸ ದೃಶ್ಯದ ತರಬೇತಿ ವೇಳೆ ಬಿದ್ದು ಪೆಟ್ಟಾಗಿ ಸಿನಿಮಾ, ಹೋಟೇಲ್ ದುಡಿಮೆಯಿಂದ ದೂರ ಉಳಿಯಬೇಕಾದ ಪರಿಸ್ಥಿತಿ ಉಂಟಾಗಿ ಮತ್ತೆ ಊರಿಗೆ ವಾಪಸ್ಸಾಗಬೇಕಾದ ಅನಿವಾರ್ಯತೆ ಅವರದ್ದಾಗಿತ್ತು. ಇಷ್ಟಾದರೂ ಛಲದಂಕಮಲ್ಲರಾಗಿದ್ದ ಅವರು ಊರಿಗೆ ಹಿಂತಿರುಗಿ ಸಣ್ಣ ಹೋಟೇಲು ಉದ್ಯಮ ಪ್ರಾರಂಭಿಸಿದರು. ಆದರೆ ಅದರಲ್ಲಿ ಯಶ ಕಾಣದೆ ಸೋತರು. ಬಳಿಕ ಆಳ್ವರ ಕೃಪಾಕಟಾಕ್ಷ ಅವರಿಗೆ ದೊರೆಯುವ ಕಾಲ ಬಂದೊದಗಿ ಆಳ್ವಾಸ್ ಆಸ್ಪತ್ರೆಯ ಸೆಕ್ಯೂರಿಟಿ ಗಾಡರ್್ ಆಗಿ ಸೇರಿಕೊಂಡರು. ಅಲ್ಲಿಂದ ಇವರ ದೆಸೆಯ ದಿಕ್ಕು ಬದಲಾಯಿತು. ಅದೃಷ್ಟ ಇವರನ್ನು ಅರಸಿ ಬಂದಿತ್ತು.
ಗಾರ್ಡ್ ಆಗಿ ಆಳ್ವಾಸ್ ಆಸ್ಪತ್ರೆ ಸೇರಿ ಒಂದು ವರ್ಷದಲ್ಲಿ ಆರ್.ಕೆ. ನಾಯ್ಕ್ರ ಬದುಕು ಬದಲಾಯಿತು. ಕಹಿ ಕ್ಷಣಗಳು ಸಿಹಿಯಾದವು. ಅವರ ಅಪರೂಪದ ವೇಷಭೂಷಣಗಳಿಂದ ಹೈದರಾಬಾದ್ ಸ್ಟೈಲ್ ಗಾರ್ಡ್ ಆದರು. ಸುಮಾರು 15 ಭಾಷೆಗಳು ಅವರಿಗೆ ಕರತಲಾಮಲಕ. ಹೀಗೆ ವಿಶೇಷತೆಯ ಸಾಗರವಾಗಿರುವ ಇವರು ಸುಮಾರು 20 ಸಾವಿರಕ್ಕೂ ಹೆಚ್ಚು ಜನರೊಂದಿಗೆ ಫೋಟೋ ಕ್ಲಿಕ್ಕಿಸಿಕಂಡು ಆನಂದ ಪಟ್ಟಿದ್ದಾರೆ. ಆಳ್ವರ ಕಾರ್ಯಕ್ರಮಗಳಲ್ಲಿ ಕಾಣಸಿಗುವ ಇವರ ಮುಖ ಸುಮಾರು 20 ಸಾವಿರಕ್ಕೂ ಅಧಿಕ ಫೋಟೋಗಳಲ್ಲಿ ಪ್ರತಿರೂಪಗೊಂಡಿದೆ.
'ನನ್ನನ್ನು ನೋಡಲು ಪುಟ್ಟ ಮಕ್ಕಳಿಗೆ ಭಯವಾಗುತ್ತದೆ. ಕೆಲ ಮಕ್ಕಳು ಹತ್ತಿರ ಸುಳಿದಾಡಲೂ ಭಯ ಪಡುತ್ತಾರೆ. ಭಯದಿಂದಲೇ ಕೆಲ ಪುಟಾಣಿಗಳು ಫೋಟೋ ಕ್ಲ್ಲಿಕ್ಕಿಸಿಕೊಂಡದ್ದುಂಟು. ಜನರಿಗೆ ನನ್ನೊಂದಿಗೆ ಫೋಟೋ ತೆಗೆಸಿಕೊಳ್ಳುವುದೆಂದರೆ ಸಂತಸ. ನಾನೂ ಅವರ ಆಸೆಗೆ ತನ್ನೀರು ಎರೆಚಿಲ್ಲ. ಬಂದು ಬಂದು ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ನನಗೂ ಭಾರೀ ಬೇಡಿಕೆ ಇದೆ. ಆದರೆ ನಾನು ಯಾವುದೇ ಹಣ ಅಪೇಕ್ಷಿಸುವಿದಿಲ್ಲ. ಕೊಟ್ಟರೆ ತೆಗೆದುಕೊಳ್ಳುತ್ತೇನೆ. ಅಂತೂ ಅವರ ಸಂತಸದಲ್ಲಿ ನಾನೂ ಒಬ್ಬ ಭಾಗಿಧಾರನಾಗಿರುತ್ತೇನೆ' ಎನ್ನುತ್ತಾರೆ ಆರ್.ಕೆ. ನಾಯ್ಕ್
ನೋಡಲು ಅಜಾನುಬಾಹು ಆಗಿದ್ದರೂ ಆರ್.ಕೆ ನಾಯಕ್ ಮೃದು ಸ್ವಭಾವಿ. ಮೋಹನ್ ಆಳ್ವರ ಆಶ್ರಯ ಪಡೆದಿರುವ ಇವರು ಅವರ ಒಪ್ಪಗೆ ಇಲ್ಲದೆ ಇತರ ಯಾವುದೇ ಕಾರ್ಯಕ್ರಮಗಳಿಗೆ ಆಕರ್ಷಣೆಯ ಕೇಂದ್ರಬಿಂದುವಾಗುವುದಿಲ್ಲ. ಸದಾ ತನ್ನ ಧಿರಿಸು, ಭೂಷಣಗಳಿಂದಲೇ ನಗಿಸುತ್ತಾ ನುಗುವ ಇವರ ಜೀವನ ನಗುವಿನಿಂದ ಕೂಡಿರಲಿ.
  • ಚಂದ್ರಶೇಖರ್ ಎಸ್ ಅಂತರ

0 comments:

Post a Comment

Share The Posts

Twitter Delicious Facebook Digg Stumbleupon Favorites More