ಸಾವಿರ ಯಕ್ಷಗಾನ ಪುಸ್ತಕಗಳ ಸರದಾರ

ಮಂಜುನಾಥ್ ಭಟ್

ಪ್ರಕೃತಿಯ ಮಡಿಲಲ್ಲಿ ತರಗತಿಗಳ ತೋರಣ;

ವಿದ್ಯಾರ್ಥಿಗಳೂ 100 ಶೇಕಡ ಹಾಜರು ಖಚಿತ

ಮಾಯಾ ಲೋಕದ ಕಿನ್ನರಿ!

ಜಾದೂ ಪ್ರವೀಣೆ ಉಜಿರೆಯ ರಕ್ಷಾ ನಾಯಕ್ .

ಕೃಷಿಗೂ ಬಂತು ವಲಸೆಯ ಖುಷಿ

ಅಡಿಕೆ ತೋಟದಲ್ಲಿ ವಲಸೆ ಕಾರ್ಮಿಕರು

ಜಾತ್ರೆಯ ಜಂಗುಳಿಯೊಳಗೆ.....!

ತುಳು ನಾಡ ಸಂಸ್ಕೃತಿ ಬಿಂಬಿಸುವ ಜಾತ್ರ್ಯೋತ್ಸವ

Monday 29 October 2012

ಬದುಕು ಪೊರೆಯುವ ಪೊರಕೆ


ಅದು ಹತ್ತು ವರ್ಷದ ಹಿಂದಿನ ದೃಶ್ಯ. ಮನೆಯಲ್ಲಿ ಅಜ್ಜಿ ವೀಳ್ಯದೆಲೆ ಬಾಯಿಗೆ ಹಾಕಿ ಗೋಡೆಗೆ ಒರಗಿ ತೆಂಗಿನ ಗರಿಗಳಿಂದ ಹಿಡಿಸೂಡಿ ತಯಾರಿಸಲು ಕೂತರೆ ಮಕ್ಕಳ ಹಿಂಡು ಅಲ್ಲಿಗೆ ಹಾಜರು. ಅಜ್ಜಿ ಕಥೆ ಹೇಳುವುದನ್ನು ಪ್ರಾರಂಭಿಸುತ್ತಿದ್ದರು. ಮಕ್ಕಳು ಕಥೆ ಆಲಿಸುತ್ತಾ ಪೊರಕೆ ತಯಾರಿಸಿವುದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆದರೆ ಈಗ ಚಿತ್ರಣವೇ ಬದಲಾಗಿದೆ. ನೈಸಗಿðವಾದ ಪೊರಕೆ ತಯಾರಿಸುವವರ ಸಂಖ್ಯೆ ಕ್ಷೀನಿಸಿದೆ. ಅದನ್ನು ಉಪಯೋಗಿಸುವವರ ಸಂಖ್ಯೆಯೂ ವಿರಳವಾಗಿದೆ. ತೆಂಗಿನ ಗರಿಗಳಿಂದ ತಯಾರಿಸುವ ಗಟ್ಟಿಯಾದ ಪೊರಕೆ ಯಾರಿಗೂ ಬೇಡವಾಗಿದೆ.
ಪಟ್ಟಣದ ಮಕ್ಕಳಿಗಂತೂ ತೆಂಗಿನ ಗರಿಗಳ ಪೊರಕೆ ಎಂದರೆ ಏನೆಂದೇ ಗೊತ್ತಿಲ್ಲ. ಅವರಿಗೆ ಏನಿದ್ದರೂ ವ್ಯಾಕುಮ್ ಕ್ಲೀನರ್ ಪ್ಲಾಸ್ಟಿಕ್ ಪೊರಕೆ, ಹಾಗೂ ಇನ್ನಿತರ ಗುಡಿಸುವ ಯಂತ್ರಗಳ ಕುರಿತು ಅರಿವು ಜಾಸ್ತಿ. ತೆಂಗಿನ ಗರಿಗಳ ಪೊರಕೆ ಕೇವಲ ಹಳ್ಳಿಗಳಲ್ಲಿ ಬಳಕೆಯಾಗುತ್ತಿದೆ, ಅದೂ ಕೆಲ ಅಜ್ಜಿಯಂದಿರಿರುವ ಮನೆಯಲ್ಲಿ ಮಾತ್ರ. ಇನ್ನುಳಿದಲ್ಲಿ ಗುಡಿಸುವ ಯಂತ್ರಗಳು ಪ್ಲಾಸ್ಟಿಕ್ ಪೊರೆಕ ಸ್ಥಾನ ಗಿಟ್ಟಿಸಿವೆ.
ಜನರು ಶ್ರಮ ರಹಿತ ಜೀವನ ನಡೆಸಲು ಮಾರುಕಟ್ಟೆಯಿಂದ ಸಿದ್ಧ ಪೊರಕೆ ತರುತ್ತಾರೆ, ಗುಡಿಸುವ ಯಂತ್ರಗಳನ್ನು ಬಳಸುತ್ತಾರೆ. ಒಂದೊಮ್ಮೆ ಗುಡಿಕೈಗಾರಿಕೆಯಲ್ಲಿ ಒಂದಾಗಿದ್ದ ಪೊರಕೆ ತಯಾರಿಕೆ ಈಗ ನಶಿಸಿಹೋಗುತ್ತಿದೆ. ಪೊರಕೆ ತಾರಿಸುವ ಕಲೆ ನೈಪುಣ್ಯತೆ ಈಗಿನ ಪೀಳಿಗೆಗೆ ತಿಳಿದಿಲ್ಲ. ಮನೆಗೆ ಪಟ್ಟಣದಲ್ಲಿರುವ ಮೊಮ್ಮಕ್ಕಳು ಬಂದರೆ ಇದೇನು ಕಡ್ಡಿಗಳನ್ನು ಒಂದೆಡೆ ಜೋಡಿಸಿ ಕಟ್ಟಿಟ್ಟಿದ್ದೀರ ಎಂದು ಪ್ರೆಶ್ನಿಸುತ್ತಾರೆ ಎನ್ನುತ್ತಾರೆ ಮಡಂತ್ಯಾರು ಸಮೀಪದ ಮಾಲಾಡಿಯ ಸುಲೋಚನ. ಅವರು ತಮ್ಮ ಮನೆಗೆ ಬೆಕಾಗುವಷ್ಟು ಪೊರಕೆಯನ್ನು ಅವರೇ ತಯಾರಿಸುತ್ತಾರೆ.
ಹಿಡಿಸೂಡಿಯನ್ನು ತೆಂಗಿನ ಹಸಿ ಹಾಗೂ ಒಣ ಗರಿಗಳಿಂದ ತಯಾರಿಸಬಹುದು. ಅಡಿಕೆ ಸೋಗೆಯಿಂದಲೂ ತಯಾರಿಸಲಾಗುತ್ತದೆ ಜೋಳದ ದಂಟುವಿನಿಂದಲ್ಲೂ ಕೆಲವರು ತಯಾರಿಸುತ್ತಾರೆ. ಪೊರಕೆಯಲ್ಲೂ ವಿವಿಧತೆ ಇದೆ. ದನದ ಹಟ್ಟಿಗೆ ತರೆಗೆಲೆ ತರಲು ಹೋಗುವಾಗ ಕೊಂಡು ಹೋಗುವ ಪೊರಕೆ ಬೇರೆ. ಮನೆ ಗುಡಿಸಲು ಉದ್ದವಾದ ಪೊರಕೆ, ಅಂಗಣ ಗುಡಿಸಲು ಗಿಡ್ಡ ಕಡ್ಡಿಗಳ ಪೊರಕೆ [ಮನೆಯೊಳಗೆ ಬಳಸಲಾದ ಹಳೆ ಪೊರಕೆ] ಹೆಚ್ಚಾಗಿ ಬಳಸುತ್ತಾರೆ ಎಂದು ಸುಲೋಚನ ತಿಳಿಸುತ್ತಾರೆ.
ತೆಂಗಿನ ಗರಿ ಪೊರಕೆಗೆ ಮಾತ್ರವಲ್ಲದೆ ಬೆಂಕಿ ಹೊತ್ತಿಸಲು, ಚಪ್ಪರ ನಿಮಿðಸಲು, ಬುಟ್ಟಿ ತಯಾರಿಸಲು ಹಾಗೂ ಮುಳಿ ಹುಲ್ಲಿನ ಮನೆ ನಿಮಿðಸುವಾಗ ಹೊದಿಕೆಯಾಗಿ ಉಪಯೋಗಿಸಲಾಗುತ್ತಿತ್ತು.  ಎಂದು ಸುಲೋಚನ ತಿಳಿಸುತ್ತಾರೆ. ಕೇದಿಗೆ ಒಲಿಯ ಚಾಪೆಯನ್ನು ಹಿಂದೆ ಬಳಸಲಾಗುತ್ತಿತ್ತು. ಆದರೀಗ ಅದು ಮಾಯವಾಗಿದೆ. ತೆಂಗಿನ ಗರಿಗಳು ಇನ್ನೂ ಅನೇಕ ಸಣ್ಣ ಪುಟ್ಟ ವಸ್ತುಗಳನ್ನು ನಿಮಿðಸಲು ಸಹಕಾರಿಯಾಗಿದೆ ಎಂದು ಅವರು ಹೇಳುತ್ತಾರೆ. ಪೊರಕೆ  ನಿಮಾðಣ ಎಲ್ಲರ ಮನೆಯಲ್ಲೂ ನಡೆಯುತ್ತಿದ್ದ ಒಂದು ಕಾಯಕ. ಆದರೀಗ ಕಣ್ಮರೆಯಾಗುತ್ತಿರುವ ಗುಡಿ ಕೈಗಾರಿಕೆಯಲ್ಲಿ ಇದು ಒಂದು. ಪೊರಕೆ ನಿಮಾðಣ ಸುಲಭವಾದರೂ ಯಾರೂ ಅದರತ್ತ ಗಮನ ಹರಿಸದಿರುವುದು ಮಾತ್ರ ವಿಷಾದನೀಯ.
  • ಚಂದ್ರಶೇಖರ್ ಎಸ್ ಅಂತರ

Thursday 25 October 2012

ಯಕ್ಷ ಪ್ರಿಯರನ್ನು ರಂಜಿಸಿ ಮೋಸಗೊಳಿಸಿದ ಸುಭದ್ರ ಕಲ್ಯಾಣ


ಬೆಳ್ತಂಗಡಿ: ಅದು ಯಕ್ಷ ಪ್ರಿಯರನ್ನು ಕೈ ಬೀಸಿ ಕರೆದ ರಂಗ ಮಂಟಪ. ತಾಳ ಮದ್ದಳೆ ಪ್ರವೀಣರು ಒಂದೆಡೆ ಸಂಗಮಗೊಂಡ ರಂಗಸ್ಥಳ. ಸಭಿಕರ ಮನಸೂರೆಗೈದ ವಾಗ್ಮಿಯರ ವಾಕ್ಚಾತುರ್ಯ, ಹಾಸ್ಯದ ಹೊನಲು ಹರಿಸಿದ ಹಾಸ್ಯಗಾರ, ಹೀಗೆ ತಾಳಮದ್ದಳೆಯು ವಿವಿಧ ಮನೋರಂಜಕ ಅಂಶಗಳನ್ನು ಒಳಗೊಂಡು ವೀಕ್ಷಕರಿಗೆ ರಸದೌತಣ ಉಣಬಡಿಸಿತಾದರೂ ಅದರ ಪೂರ್ಣ ಸವಿಯನ್ನುಣ್ಣಿಸುವಲ್ಲಿ ವಿಫಲವಾಯಿತು.
ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವದ ವತಿಯಿಂದ ಯಕ್ಷ ಮಿತ್ರ ಸಂಘ ಸಾದರ ಪಡಿಸಿದ ಯಕ್ಷಗಾನ ತಾಳಮದ್ದಳೆ ಸುಭದ್ರ ಕಲ್ಯಾಣ, ತಾಳಮದ್ದಳೆಯ ಭಾವವನ್ನು ವೀಕ್ಷಕರಲ್ಲಿ ತುಂಬಿತು. ಬಹು ಮುಖವುಳ್ಳ ವಿವಿಧಾರ್ಥ ಕೊಡುವ ಪದ ಪ್ರಯೋಗ, ಅರ್ಥಗಭಿðತ ಅರ್ಥಗಾರಿಕೆ, ಕಂಚಿನ ಸ್ವರದ ಭಾಗವತಿಕೆ ಪ್ರಸಂಗಕ್ಕೆ ರಂಗು ಮಡಿಸಿತು.
ಮಲ್ಪೆ ವಾಸುದೇವ ಸಾಮಗ ಬಲರಾಮನಾಗಿ, ಉಜಿರೆ ಅಶೋಕ್ ಭಟ್ ಶ್ರೀ ಕೃಷ್ಣನಾಗಿ ಸುಣ್ಣಂಬಳ ವಿಶ್ವೇಶ್ವರ್ ಭಟ್ ಅಜುðನನಾಗಿ, ವಾಟೆ ಪಡ್ಪು ವಿಷ್ಣು ಶರ್ಮ ಸುಭದ್ರೆಯಾಗಿ, ರಾಮ ಜೋಯಿಸ್ ಬೆಳ್ಳಾರೆ ವನಪಾಲಕನ ಪಾತ್ರಧಾರಿಯಾಗಿ ಅಭಿನಯಿಸಿ ಮಾತಿನ ಬಾಣಗಳನ್ನು ಪುಂಖಾನುಪುಂಖವಾಗಿ ಎಸೆದು ಮಾತಿನ ಮಂತಪ ನಿಮಿðಸಿ ಜನರ ಮನ ಕಸಿದರು. ವೀಕ್ಷಕರ ಚಪ್ಪಾಳೆ ನಡುವೆ ಪಾತ್ರಧಾರಿಗಳು ಮಿಂಚತೊಡಗಿದರು. ಆದರೆ ಬಹು ನಿರೀಕ್ಷಿತ, ಪ್ರಸಂಗದ ಕೇಂದ್ರಬಿಂದು ಆಗಿರುವ ಕೌರವನ ಪಾತ್ರ ಮಾತ್ರ ಕಣ್ಮರೆಯಾಗಿತ್ತು. ಪಾರ್ಥ ಕೌರವನ ಯುದ್ಧದ ಸನ್ನಿವೇಶ, ಕೃಷ್ಣನ ತಂತ್ರಗಾರಿಕೆ ಸುಭದ್ರೆಯ ಮಂಗಳೋತ್ಸವ ಇವ್ಯಾವುದೂ ಕಾಣಸಿಗದೆ ಪ್ರಸಂಗದ ಕಳೆಗುಂದುವಂತೆ ಮಾಡಿತು. ಪ್ರೇಕ್ಷಕರ ಮೊಗ ಬಾಡಿಸಿತು.
ಪ್ರಸಂಗದ ಪ್ರಮುಖ ಸನ್ನಿವೇಷಗಳನ್ನು ತೋರಿಸದೆ ಅರ್ಧಕ್ಕೆ ತಾಳಮದ್ದಳೆಯನ್ನು ಮೊಟಕುಗೊಳಿಸಿ, ಕಥೆಯನ್ನು ಅxÉÊðಸಿಕೊಳ್ಳ ಬಂದ ಯಕ್ಷಪ್ರಿಯರ ಮನಸ್ಸನ್ನು ಘಾಸಿಗೊಳಿಸಿತು. ಅಜುðನ ಸನ್ಯಾಸಿ ವೇಷದಲ್ಲಿರುವಾಗ ಬಲರಾಮನು ಚಾತುಮಾðಸಕ್ಕೆ ಅಜುð ಕರೆದು ಸುಭದ್ರೆಯನ್ನು ಪಾರ್ಥನ ಸೇವಕಿಯಾಗಿಸುವಲ್ಲಿಗೆ ಕಥೆಯನ್ನು ಮುಕ್ತಾಯಗೊಳಿಸಿ ಪ್ರಸಂಗಕ್ಕೆ ಚ್ಯುತಿ ಉಂಟು ಮಾಡಿದ್ದಲ್ಲದೆ ಪ್ರೇಕ್ಷಕರಲ್ಲಿ ದ್ವಂದ್ವ ವಾತಾವರಣ ಮೂಡಿಸಿ ತಪ್ಪು ಕಲ್ಪನೆಗೆ ಕಾರಣವಾಯಿತು.
ಎರಡು ಗಂಟೆಯಿಂದ ಪ್ರಾರಂಭವಾಗಿ ಆರು ಗಂಟೆ ತನಕ ಸಾಗಿದ ಪ್ರಸಂಗದಲ್ಲಿ ಪಾತ್ರಧಾರಿಗಳು ತನ್ನ ಮಾತುಗಾರಿಕೆಯ ವಿದ್ವತ್ ತೋರಿಸುವಲ್ಲಿ ವಿನಾಃಕಾರಣ ಕಾಲಹರಣ ಮಾಡಿ ಪ್ರಸಂಗ ಪೂರ್ಣಗೊಳಿಸುವಲ್ಲಿ ವಿಫಲರಾದರು. ಕೌರವನಂತಹ ಹಿರದಾದ ಪಾತ್ರ ರಂಗಸ್ಥಳ ಪ್ರವೇಶಿಸದೆ, ಸುಭದ್ರೆಗೆ ಕಲ್ಯಾಣವಾಗದೆ ಪ್ರಸಂಗ ಮುಕ್ತಾಯ ಕಂಡಿತು. ಪಾತ್ರದ ಅಭಿನಯಧಾರಿಗಳು ಸಮಯದ ಇತಿಮತಿ ಅರಿತು ಮಾತಾಡಬೆಕು. ಪ್ರಸಂಗ ಪೂರ್ಣಗೊಳಿಸಬೇಕು. ಪೂರ್ಣ ಪ್ರಸಂಗ ನೋಡ ಬಂದ ಜನರಿಗೆ ಅರ್ಧ ಪ್ರಸಂಗ ತೋರಿಸಿ ತಪ್ಪು ಮಾಹಿತಿ ರವಾನೆಯಾಗದಂತೆ ಜಾಗೃತೆವಹಿಸಿಕೊಳ್ಳಬೇಕಾದ ಅಗತ್ಯತೆ ಮುಮ್ಮೇಳದ ಪಾತ್ರಧಾರಿಗಳದ್ದಾಗಬೇಕು.
ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ ತನ್ನ ಕಂಚಿನ ಸ್ವರ ಹಾಗೂ ವಿವಿಧ ಹಾಡುಗಾರಿಕೆಯ ಶೈಲಿ ಮತ್ತು ಸ್ವರ ಸಂಯೋಜನೆಯಿಂದ ಜನರ ಮನಸೂರೆಗೈದರು. ಚೆಂಡೆ ಹಾಗು ಮದ್ದಳೆ ವಾದಕರಾಗಿ ಪ್ರಶಾಂತ್ ವಗೆನಾಡು. ಗುರುಪ್ರಸಾದ್ ಬೋಳಿಂಜಡ್ಕ ಸಹಕರಿಸಿದರು. ಯುವರಾಜ್ ಆಚಾರ್ಯ ಚಕ್ರತಾಳವಿತ್ತರು.
ಆರಂಭ ಸರಿಯಾಗಿದ್ದರೂ ಅಂತ್ಯ ಸುಂದರವಾಗದೆ ಪ್ರೇಕ್ಷಕರಿಗೆ ನೋವುಂಟು ಮಾಡಿದ್ದು ಹೊರತುಪಡಿಸಿದರೆ, ಈ ಪ್ರಸಂಗ ತಾಳಮದ್ದಳೆಯ ವಿವಿಧ ಆಯಾಮಗಳನ್ನು ಅಚ್ಚುಕಟ್ಟಾಗಿ ತೋರಿಸಿ ಎಲ್ಲರ ಮೆಚ್ಚುಗೆಗ ಪಾತ್ರವಾಯಿತು.
  • ಚಂದ್ರಶೇಖರ್ ಎಸ್ ಅಂತರ

ರಾಜಕೀಯ ಬಣ್ಣ ಪಡೆಯುತ್ತಿರುವ ಗಣೇಶೋತ್ಸವ


ಬೆಳ್ತಂಗಡಿ: ಗಣೇಶೋತ್ಸವ ಹೊಲಸು ರಾಜಕೀಯದಿಂದಾಗಿ ತನ್ನ ಮೌಲ್ಯ ಕಳೆದುಕೊಳ್ಳುತ್ತಿದೆ. ಊರಿಗಂದು ಗಣಪನ ಉತ್ಸವವೀಗ ಗಲ್ಲಿ, ಕೇರಿ ಸ್ವರೂಪ ಪಡೆದು ಹೊಲಸು ರಾಜಕೀಯದ ಬಣ್ಣ ತಗಲಿ ಹಿಂದೂ ಸಂಸ್ಕೃತಿಯನ್ನು ಹಾನಿ ಉಂಟುಮಾಡುತ್ತದೆ ಎಂದು ಸಂಸ್ಕಾರ ಭಾರತಿ ಕನಾðಟಕದ ಉಪಾಧ್ಯಕ್ಷ ಚಕ್ರವತಿð ಸೂಲಿಬೆಲೆ ತಿಳಿಸಿದರು
ಅವರು ಮಡಂತ್ಯಾರಿನ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಧಾðಮಿಕ ಸಭಾ ಕಾರ್ಯಕ್ರಮದ ಅತಿಥಿಯಾಗಿ ಮಾತನಾಡುತ್ತಿದ್ದರು
ಬಲಿಷ್ಟ ರಾಷ್ಟ್ರ ನಿಮಾðಣದ ಕನಸು ಹೊತ್ತು ಬಾಲಗಂಗಾದರ ತಿಲಕರು ಗಣೇಶೋತ್ಸವ ಪ್ರಾರಂಭಿಸಿದರು ಆದರೀಗ ಅದು ರಾಜಕೀಯ ಗಾಳಕ್ಕೆ ಸಿಲುಕಿ ಶೋಕಿ ಆಗಿ ಮಪಾðಡಾಗಿದೆ. ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಿದ್ದ ಉತ್ಸವ ಮೌಲ್ಯ ಕಳೆದುಕೊಂಡು ಪಕ್ಷಗಳ ಗಣಪತಿ ಉತ್ಸವವಾಗಿ ಬದಲಾಗಿದೆ ಎಂದು ತಿಳಿಸಿದರು
ಹಿಂದುತ್ವ ಈಗ ಜೀವಂತವಾಗಿರುವುದ ಇಂತಹ ಉತ್ಸವಗಳಿಂದ ಅದನ್ನು ರಾಜಕೀಯ ಪಿತೂರಿಗೆ ಬಳಸಬಾರದು. ಸ್ವತಂಕ್ಕೆ ಬದುಕು ನಡೆಸದೆ ರಾಷ್ಟ್ರವೇ ದೇವರು ಎಂದು ಭಾವಿಸಿ ರಾಷ್ಟ್ರಿಯತೆ ಒಗ್ಗಟ್ಟಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಜಗತ್ತಿನಲ್ಲಿ ಹೆಚ್ಚು ಕಷ್ಟ ಅನುಭವಿಸಿದ್ದ ದೇಶ ಮತ್ತು ಉನ್ನತ ಸಂಸ್ಕೃತಿಗೆ ಹೆಚ್ಚು ಗೌರವ ಸಂಪಾದಿಸಿದ ರಾಷ್ಟ್ರ ಭಾರತ. ಯಾವುದಕ್ಕೂ ಜಗ್ಗದೆ ಬಲಾಡ್ಯವಾಗಿ ಬೆಳೆಯುತ್ತಿರವ ಅಭಿವೃದ್ಧಿಶೀಲ ರಾಷ್ಟ್ರ ಇದಾಗಿದೆ. ಯುವಕರು ವಿವೇಕಾನಂದರನ್ನು ಮಾದರಿಯನ್ನಾಗಿಸಿಕೊಂದು ದೇಶ ಕಟ್ಟುವ ಕಾಯಕದಲ್ಲಿ ತೊಡಗಬೇಕು ಎಂದು ತಿಳಿಸಿದರು.
ನಮ್ಮ ದೇಶ ಪರಕೀಯರ ಕೈವಶವಾಗುವುದನ್ನ ತಡೆಯಬೇಕು. ಹಿಂದು ಸಂಸ್ಕೃತಿಯನ್ನು ಉಳಿಸಬೆಳೆಸಬೇಕು ಎಂದು ನುಡಿದರು. ನಮ್ಮಲ್ಲಿ ಒಗಟ್ಟು ಪ್ರದಶಿðಸಬೇಕು. ಹೊರಗಿನ ಶಕ್ತಿ ನಮ್ಮನ್ನು ನಾಶಪಡಿಸುವುದಂಕ್ಕಿಂತ ಹೆಚ್ಚಾಗಿ ನಮ್ಮೊಳಗಿನ ಒಳ ಜಗಳ ನಮ್ಮನ್ನು ನಾಶ ಪಡಿಸುತ್ತದೆ. ಭಾರತವನ್ನು ಸಂಸ್ಕೃತಿಯನ್ನು ಉಳಿಸಿಬೇಕಾದರೆ ಮೊದಲು ನಾವು ಸದೃಡರಾಗಬೇಕ, ಹಿಂದೂ ಸಂಘಟನೆಗಳು ಸಂಘ ಪರಿವಾರಗಳು ಈ ಕುರಿತಾಗಿ ಜಾಗೃತಿ ನಡೆಸುತ್ತಿದೆ ಎಂದರು.
ಕನರ್ಾಟಕ ಸರಕಾರ ಹಿಂದುಳಿದ ಆಯೋಗಗಳ ಸದಸ್ಯ ಎಂ ತುಂಬಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂತಹ ಒಗ್ಗಟ್ಟಿನ ಉತ್ಸವ ಹಿಂದೂ ಸಂಸ್ಕೃತಿಗೆ ಕೈಗನ್ನಡಿ. ಭಾರತೀಯ ಸಂಸ್ಕೃತಿಗೆ ಇದು ಮಾದರಿ ಎಂದರು.
ವೇದಿಕೆಯಲ್ಲಿ ಮಡಂತ್ಯಾರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಪುಜಾರಿ ಕೋಟೆ ಉಪಸ್ಥಿತರಿದ್ದರು.
ಧಾಮಿðಕ ಕ್ಷೇತ್ರಗಳಿಗೆ ನೀಡಿದ ಸೇವೆಗೆ ಮಂಜುನಾಥ್ ಭಟ್ ಅಂತರ ಅವರಿಗೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ  ಚಕ್ರವತಿð ಸೂಲಿಬೆಲೆ, ತುಂಗಪ್ಪ ಬಂಗೇರರು ಸನ್ಮಾನಿಸಿದರು
ಸಂಜೀವ ಶೆಟ್ಟಿ ಸ್ವಾಗತಿಸಿದರು. ಪದ್ಮನಾಭ ಸುವರ್ಣ ವಂದಿಸಿದರು ತುಳಸಿ ದಾಸ್ ಪೈ ನಿರೂಪಿಸಿದರು.
  • ಚಂದ್ರಶೇಖರ್ ಅಂತರ

Wednesday 24 October 2012

ನವರಸ ಭಾವ ತುಂಬಿದ ಭರತನಾಟ್ಯ


ಬೆಳ್ತಂಗಡಿ : ಅದು ಭರತನಾಟ್ಯದ ಸೊಗಡನ್ನು ಉಣಬಡಿಸಿದ ನಾಟ್ಯಮಂಜರಿ. ನವರಸಗಳು ಸಂಗಮಗೊಂಡ ವೇದಿಕೆ. ನಾಟ್ಯ ರಸಿಕರ ಮನ ತಣಿಸಿದ ಪರಿಪೂರ್ಣ ಕಲೆ ಬಿಂಬಿಸಿದ ಭರತನಾಟ್ಯ ನೃತ್ಯ ವೈಭವ.
ಉಜಿರೆ ಶ್ರೀ ಧ.ಮ ಕಾಲೇಜಿನಲ್ಲಿ ಮಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಯುವ ಸೌರಭ ಪ್ರಾಯೋಜಕತ್ವದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯವರ ಸಹಯೋಗದೊಂದಿಗೆ ನಡೆದ ಭರತನಾಟ್ಯ ನೃತ್ಯ ವೈಭವ ಕಾರ್ಯಕ್ರಮದ ಸಂದರ ಕ್ಷಣಗಳ ಮೆಲುಕುಗಳು.
ಕಾಲೇಜಿನ ದ್ವಿತೀಯ ಬಿ.ಕಾಂ ಪದವಿ ವಿದ್ಯಾನಿ, ಬೆಳ್ತಂಗಡಿ ಕಲಾನಿಕೇತನ ನೃತ್ಯ ಸಂಸ್ಥೆಯ ವಿದುಷಿ ವಿದ್ಯಾ ಮನೋಜ್ ರ ಶಿಷ್ಯೆ, ರಾಜಶ್ರೀ ತನ್ನ ನೃತ್ಯದ ಮೂಲಕ ನೃತ್ಯ ಪ್ರೇಮಿಗಳ ಮನಸ್ಸನ್ನು ಸೂರೆಗೈದ ನಾಟ್ಯ ಮಯೂರಿ. ನವರಸಗಳ ನವ ಭಾವವನ್ನು ನಯವಾಗಿ ಮೆಲ್ಲಿಸಿದ ನಾಟ್ಯವಿಶಾರದೆ.
ಕಿಕ್ಕಿರಿದು ತುಂಬಿದ್ದ ಸಮ್ಯಕ್ ದರ್ಶನ ಸಭಾವನದಲ್ಲಿ ತನ್ನ ನಾಟ್ಯ ದರ್ಶನದಿಂದ ವೀಕ್ಷಕರ ಚಿತ್ತ ಸೆಳೆದು ನಾಟ್ಯದ ವಿವಿಧ ಆಯಾಮಗಳನ್ನು ಸುಂದರವಾಗಿ ಪ್ರದ²ðಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದಳು.
ರಾಜಶ್ರೀಗೆ ಹಾಡುಗಾರಿಕೆಯಲ್ಲಿ ಪಾಣೆಮಂಗಳೂರಿನ ಕೃಷ್ಣಾಚಾರ್, ಮೃದಂಗದಲ್ಲಿ ಗೀತೇಶ್ ನೀಲೇಶ್ವರ್, ವಯಲಿನ್ನಲ್ಲಿ ಕಾಸರಗೋಡಿನ ಬಾಲಾರಾಜ್ ಸಹಕರಿಸಿದರು.
ಇಂದ್ರ ಲೋಕದ ಲಲನೆಯರನ್ನು ನಾಚಿಸುವಂತೆ ನಯನಮನೋಹರವಾಗಿ ನಸಿದ ರಾಜಶ್ರೀ ಕಾಲೇಜಿನ ಸಭಾಭವನವನ್ನು ಸ್ವರ್ಗ ಸೃಜಿಸಿದರು. ಅವರ ನೃತ್ಯ ಸೊಂಪು ಸಭಿಕರಲ್ಲಿ ನಾಟ್ಯದ ಅಲೆ ನಿ«Äðಸಿತು. ಕಣ್ಣರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ನಾಟ್ಯ ಕಾರ್ಯಕ್ರಮ ಮುಗಿದಂತೆ ಭಾಸವಾಯಿತು. ಸಭಾಭವನದ ನಾಟ್ಯವನ್ನು ಆಸ್ವಾದಿಸಿ ಹೊರಬಂದ ಪ್ರೇಕ್ಷಕರ ಮೊಗದಲ್ಲಿ ಬ್ರಹ್ಮಾನಂದ.
ರಾಜಶ್ರೀಯ ನವಿಲ ನರ್ತನ ಕಾಲೇಜಿನಲ್ಲಿ ಸುಮಧುರ ತಂಪನೆಯ ತಂಗಾಳಿಯನ್ನು ಬೀಸಿತ್ತು. ಎಲ್ಲರನ್ನೂ ಸೋಜಿಗಗೊಳಿಸಿತ್ತು. ಕಾಲೇಜಿನಲ್ಲಿ ನಡೆದ ಈ ನಾಟ್ಯ ಕಲಾ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಧನ್ಯತಾ ಭಾವ ಮೂಡಿಸಿತ್ತು. ಇಂತಹ ಉತ್ತಮ ಕಾರ್ಯಕ್ರಮ ನಿರೂಪಿಸಿದ್ದಕ್ಕೆ ಪ್ರಶಂಸೆ ದೊರೆಯಿತು.
  • ಚಂದ್ರಶೇಖರ್ ಎಸ್ ಅಂತರ

ಆರಕ್ಷಕರಿಗಿಲ್ಲ ರಕ್ಷಣೆ



ಬೆಳ್ತಂಗಡಿ/ಪುಂಜಾಲಕಟ್ಟೆ: ಬಿರುಕು ಬಿಟ್ಟ ಗೋಡೆಗಳು, ಸೋರುವ ಹಂಚುಗಳು, ಬೀಳಲು ಮಿನಾಮೇಷ ಎಣಿಸುತ್ತಿರುವ ಕಟ್ಟಡದ ಕೆಲ ಭಾಗಗಳು, ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದೆ ಪರದಾಡುವ ದೃಶ್ಯಗಳು, ಹಾಗಾಗಿ ನೂತನ ಕಟ್ಟಡ ನಿ«Äðಸಿದರೂ ಇನ್ನೂ ಸ್ಥಲಾಂತರಗೊಳ್ಳದ ಪೊಲೀಸ್ ಪೇದೆಗಳ ದೌಭಾðಗ್ಯಗಳು ಇತ್ಯಾದಿ ಇತ್ಯಾದಿಗಳು. ಇದು ಸಮಾಜದ ಸುವ್ಯವಸ್ಥೆ ಕಾಪಾಡುವ ಪೊಲೀಸರ ಪುಂಜಾಲಕಟ್ಟೆ ಉಪ ಠಾಣೆಯ ದುವ್ಯðವಸ್ಥೆಗಳು.
ಹಂಚಿನ ಕಟ್ಟಡ ಇರುವ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಅವ್ಯವಸ್ಥೆಗಳು ಹಲವಾರು. ಸಾರ್ವಜನಿಕರು ಪೊಲಿಸರಿಗೆ ದೂರು ನಿಡಲು ಹೋದಾಗ ಜನಜಂಗುಳಿ ಇದ್ದರೆ  ಸ್ಥಳದ ಅಭಾವದಿಂದಾಗಿ ಕುಳಿತುಕೊಳ್ಳು ಪಕ್ಕದಲ್ಲಿರುವ ಪೊಲೀಸ್ ಜೀಪ ಶೆಡ್ ಆಶ್ರಯಿಸಿಕೊಳ್ಳ ಬೇಕಾದ ದುರಂತ  ಪರಿಸ್ಥತಿ ಒದಗಿದೆ.
ಇದರ ಕುರಿತಾಗಿ ಉನ್ನತ ಅಧಿಕಾರಿಗಳಿಗೆ ತಿಳಿ ಹೇಳಿ ವಿಸ್ತೃತ ನೂತನ ಕಟ್ಟಡ ನಿªÀiÁðಣಗೊಂಡಿದೆಯಾದರೂ ಸ್ಥಳಾಂತರಗೊಳ್ಳಲು ಮುಹೂರ್ಥ ಮಾತ್ರ ಇನ್ನೂ ಒದಗಿ ಬಂದಿಲ್ಲ. ಕಳೆದ ವರ್ಷವೇ ಕಟ್ಟಡ ನಿªÀiÁðಣ ಕಾಮಗಾರಿ ಪ್ರರಂಭಸಲಾಗಿತ್ತು. ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ನೂತನ ಕಟ್ಟಡ ನಿªÀiÁðಣವಾಗಿ ಎರಡು ತಿಂಗಳುಗಳೇ ಕಳೆದಿದೆ. ಆದರೆ ಇನ್ನೂ ಅಸ್ತಿಪಂಜರದಂತಿರುವ ಅದೇ ಹಳೇ ಸೋರುವ ಕಟ್ಟಡದಲ್ಲಿ ಕೆಲಸ ನಿರ್ವಹಿಸುವ ದು«ðಧಿ ಪೊಲೀಸರದು.
ನೂತನ ಕಟ್ಟಡ ನಿ«Äðಸಲು ಅನುಮತಿ ನೀಡಿಡ ಉನ್ನತ ಪೊಲೀಸ್ ಅಧಿಕಾರಿಗಳು, ಕೈ ಜೋಡಿಸಿದ ರಾಜಕಾರಣಿಗಳು ಕಟ್ಟಡ ನಿªÀiÁðಣವಾಗಿ ಎರಡು ತಿಂಗಳು ಕಳೆದರೂ ಸ್ಥಳಾಂತರಗೊಳಿಸಲು ಅನುಮತಿ ನೀಡದ ಕಾರಣ ಪುಂಜಾಲಕಟ್ಟೆ ಠಾಣೆಯ ಪೊಲೀಸರಿಗೆ ಅಂಗೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಹ ಪರಿಸ್ಥತಿ.
ಹಳೆ ಕಟ್ಟಡದ ದರಾವಸ್ಥೆ ಕಂಡ ಸಾರ್ವಜನಿಕರು ಹೊಸ ಕಟ್ಟಡಕ್ಕೆ ಪ್ರವೇಶ ಯಾವಾಗವೆಂದು ಪೊಲೀಸರಲ್ಲಿ ಪ್ರಶ್ನಿಸಿದರೆ ಕೆಲ ರಾಜಕೀಯ ವ್ಯಕ್ತಿಗಳು ಹಿರಿಯ ಅಧಿಕಾರಿಗಳು ಬರಬೇಕು ಉದ್ಘಾಟಿಸಬೇಕು ಎಂದು ಪೆಚ್ಚು ಮೋರೆಯಲ್ಲಿ ಪೊಲೀಸರು ತಿಳಿಸುತ್ತಾರೆ.
ಮಳೆಗಾಲ ಪ್ರಾರಂಭವಾಗಿ ಹಲವಾರು ದಿನಗಳೇ ಕಳೆದಿವೆ. ಸೋರುತ್ತಿರುವ ಕಟ್ಟಡದಿಂದಾಗಿ ಅಲ್ಲಿರುವ ಕಡತಗಳು ಉಪಕರಣಗಳು ಮಳೆಗೆ ಒದ್ದೆಯಾಗಿ ನಾಶವಾಗುವ ಸಂಭವವೂ ಇದೆ. ರಕ್ಷಣೆ ನೀಡುವ ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ.
ಹಲವಾರು ವರ್ಷದ ಬಳಿಕ ಸುಸಜ್ಜಿತ ಪೊಲೀಸ್ ಠಾಣೆಯೊಂದು ಪುಂಜಾಲಕಟ್ಟೆಯಲ್ಲಿ ನಿªÀiÁðಣವಾಗಿದೆಯಾದರೂ ಅಲ್ಲಿಗೂ ಹೋಗಲಾರದೆ ಇಲ್ಲಿಯೂ ಇರಲಾಗದೆ ಪೊಲೀಸರು ತ್ರಿಶಂಕು ಸ್ಥಿತಿ ತಲುಪಿದ್ದಾರೆ.  ನೂತನ ಕಟ್ಟಡದಲ್ಲಿ ಯಥೇಚ್ಛ ಸ್ಥಳ ಉತ್ತಮ ವ್ಯವಸ್ಥೆ, ಕಾಂಕ್ರೀಟು ಕಟ್ಟಡ ಹೊಂದಿದೆ. ಎಲ್ಲವೂ ಇದ್ದು ಏನೂ ಇಲ್ಲದಂತಹ ಪರಿಸ್ಥತಿ ಪೊಲೀಸರದ್ದಾಗಿದೆ.
ನೂತನ ಕಟ್ಟಡ ಕಟ್ಟಲು ಹಲವಾರು ವರ್ಷಗಳ ಬಳಿಕ ಹಸಿರು ನಿಶಾನೆ ನೀಡಿದ್ದ ಉನ್ನತ ಅಧಿಕಾರಿಗಳು, ಜೊತೆಗೂಡಿದ್ದ ಜನಪ್ರತಿನಿಧಿಗಳು ಸುಖಾಸುಮ್ಮನೆ ಉದ್ಘಾಟಣೆ ಮಾಡಲು ಬಾರದೆ ಕಾಲಹರಣ ಮಾಡುತ್ತಿರುವುದು ಉದಾಸಿನಕ್ಕೆ ಜಲಂತ ನಿದರ್ಶನ ನೂತನ ನಿ«Äðತ ಕಟ್ಟಡವಿದ್ದರೂ ಅಜೀuÁð ವಸ್ಥೆಯಲ್ಲಿರುವ ಕಟ್ಟಡದಲ್ಲೇ ಕೆಲಸ ನಿರ್ವಹಿಸಬೇಕಾದ ¥ÉÆಲೀಸರ ದುಸ್ಥಿತಿಯನ್ನು ಕಂಡೂ ಕಾಣದಂತೆ ಕುಳಿತಿರುವ ಪೊಲೀಸ್ ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ. ಅತಿ ಶೀರ್ಘದಲ್ಲಿ ನೂತನ ಕಟ್ಟಡವನ್ನು ಉದ್ಘಾಟಿಸಿ ¥ÉÆಲೀಸರಿಗೆ ಸುಗಮವಾಗಿ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿದೆ.
  • ಚಂದ್ರಶೇಖರ ಎಸ್ ಅಂತರ

Sunday 21 October 2012

ನಲಿಪು ಬಾಲೆ ನಲಿಪು...!


ದು ನವರಾತ್ರಿಯ ಸಮಯ ಎಲ್ಲಿ ನೋಡಿದರಲ್ಲಿ ವೇಷಧಾರಿಗಳ ಮಾನೆðಮಿ ಕುಣಿತ. ಹುಲಿ ಕರಡಿ ಸಿಂಹಗಳು ಮನೆಗೆ ಹಾಜರಾಗುವ ವೇಳೆ. ಮಕ್ಕಳಿಗೆ ಭಯ ಮಿಶ್ರಿತ ಕಾತುರತೆಯ ಭಾವ. ಡೋಲು ನಗಾರಿಗಳ ಸದ್ದು ಕೇಳಿದರೆ ಸಾಕು ಅಮ್ಮಾ ಹುಲಿ ಬಂತು ಹುಲಿ ಎಂದು ಮಕ್ಕಳೂ ಡಂಕಣಕ ನಲಿವ ಪರಿ ಕಣ್ಣಿಗೆ ಇಂಪು. ಆಹ್ ಇದು ನವರಾತ್ರಿಯ ವೈಭವ.

ಇದು ಅವಿಭಾಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಚರಿಸಿವ ನವರಾತ್ರಿಯ ಮೆರುಗಿನ ಮೆಲುಕುಗಳು. ದಿನಾ ಮನೆಗೆ ಬರುತ್ತಿದ್ದ ಕೊರಗಪ್ಪಣ್ಣ ನವರಾತ್ರಿಯ ವೇಳೆ ಹುಲಿ ವೇಷಧರಿಸಿ ಮನೆಗೆ ಬಂದು ಕುಣಿತದ ಜಲಕ್ ತೋರಿಸಿ ಗತ್ತು ಗೈರತ್ತು ಮರೆವ ಅಪೂರ್ವಗಳಿಗೆ. ಮಕ್ಕಳೂ ಅವರೊಂದಿಗೆ ಸೇರಿ ನಾಲ್ಕು ಹೆಜ್ಜೆ ಹಾಕಿ ಮನೆ ಮಂದಿಯರನ್ನೆಲ್ಲಾ ಫಿದಾಗೊಳಿಸುವ ಅದ್ಬುತ ಕ್ಷಣ.
ಹೌದು ನವರಾತ್ರಿ-ದಸರಾ ನಾಡಹಬ್ಬ. ಕರಾವಳಿ ಜಿಲ್ಲೆಯಲ್ಲಿ ಈ ಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ವಿಶಿಷ್ಟ ರೀತಿಯ ವೇಷಧರಿಸಿ ಹುಲಿ, ಕರಡಿಗಳನ್ನು ಬಿಂಬಿಸುವ ರೀತಿಯಲ್ಲಿ ಮುಖಗಳಿಗೆ ಬಣ್ಣ ಬಳಿದು ದೋಲು ನಗಾರಿಗಳೊಂದಿಗೆ ಪೇಟಯೆಲ್ಲಾ ತಿರುಗಿ ಹುಲಿ, ಕರಡಿ ಸಿಂಹದಂತೆ ತುಸು ಗಾಂಭೀರ್ಯದ ಮೋಜಿನ ಕುಣಿತ ಎಲ್ಲರಲ್ಲೂ ಹಬ್ಬದ ಸಂಭ್ರಮ ಇಮ್ಮಡಿಗೊಳಿಸುತ್ತದೆ. ಅದರಲ್ಲೂ ಡಿಫರೆಂಟ್ ವೆರೈಟಿಯ ವೇಶಗಳು ಕಣ್ತನಿಸುತ್ತದೆ. ಈಗೀಗ ನಲಿಪುಬಾಲೆಗಳೂ ಈ ಕುಣಿತದಲ್ಲಿ ಭಾಗವಹಿಸಿ ಜನರಿಗೆ ಮನೋರಂಜನೆ ನೀಡುತ್ತಿದ್ದಾರೆ. ಶಾಲೆಗೆ ದಸರಾ ರಜೆ ಇರುವುದರಿಂದ ಮರಿ ಸೈನ್ಯದ ಕುಣಿತ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ಈ ವೇಷಗಳು ತಲೆಮಾರುಗಳಿಂದ ಪದ್ಧತಿಯಾಗಿ ಅಚರಿಸಲಾಗುತ್ತಿದೆ. ಇದರ ಹಿಂದೆ ಒಂದು ಧಾಮಿðಕ  ಹಿನ್ನಲೆ ಇದೆ. ರೋಗ ರುಜಿನದಿಂದ ಬಳಲುವವರು ಕಾಯಿಲೆ ವಾಸಿಯಾಗಲೆಂದು ದೇವಿಯಲ್ಲಿ ನವರಾತ್ರಿ ಷ ಧರಿಸುತ್ತೇನೆ ಎಂದು ಹರೆಕೆ ಹೊತ್ತುಕೊಳ್ಳುತ್ತಾರೆ. ಹೀಗೆ ವೇಷಧರಿಸುವ ಭಕ್ತರು ಪ್ರತೀ ಮನೆಯಂಗಡಿಗಳಿಗೂ ಬೇಟಿ ನೀಡಿ ನತಿðಸಿ ತಮ್ಮ ಹರಕೆ ಪೂತಿðಗೊಳಿಸುತ್ತಾರೆ. ಕೊಟ್ಟ ಕಾಣಿಕೆಯನ್ನು ತೆಗೆದು ಕೊಳ್ಳುತ್ತಾರೆ. ತಮ್ಮ ದಿನದ ಮಾಮೂಲು ಖಚಿð (ಊಟ, ತಿಂಡಿಗೆ) ಬಳಸಿ ಮಿಕ್ಕಿದ್ದನ್ನು ದೇವರ ಹುಂಡಿಗೆ ಹಾಕುತ್ತಾರೆ. ಇದಲ್ಲದೆ ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ಹರಕೆ ಹೊತ್ತು ಹೋದವರು ಹಣಕ್ಕಾಗಿ ಪೀಡಿಸಬಾರದಂತೆ. ದೇವರ ಕೃಪೆಗೆ ಪಾತ್ರರಾಗಲು ಬಯಸುವವರಿಗೆ ಇದೊಂದು ಸೇವೆ.
ಪೌರಾಣಿಕ ಹಿನ್ನಲೆಯ ಈ ವೇಷಗಳು ತಮ್ಮ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿದೆ. ವ್ಯಾಪಾರಿಕರಣವಾಗಿ ಬದಲಾಗಿದೆ. ಮಾರುಕಟ್ಟೆ ಇಲ್ಲಿಗೂ ಕಾಲಿಟ್ಟಿದೆ.. ಟೆಂಪೂ, ಜೀಪ್ ಹಾಗೂ ಇನ್ನಿತರ ವಾಹನಗಳನ್ನು ಬಾಡಿಗೆ ಪಡೆದು ತಂಡೋಪ ತಂಡವಾಗಿ ಹಣಗಳಿಸುವ ಆಸೆ ಹೊಂದಿ ಕಾಟಾಚಾರಕ್ಕೆ ವೇಷಧರಿ ಹಣವಸೂಲಿ ಮಾಡುವವರು ಹಲವರಿದ್ದಾರೆ. ಹಬ್ಬದ ಹರೆಕೆಯ ಹೆಸರಿನಲ್ಲಿ ಸುಖಾಸುಮ್ಮನೆ ಬಣ್ಣಬಳಿದು ಎಣ್ಣೆ ಪೂಸಿಕೊಂಡು ಹಣ ಸಂಪಾದಿಸುವುದು ಚಾಳಿಯಾಗಿದೆ. ಇಂತಹವರ ಸಂಖ್ಯೆ ಈಗ ಹೆಚ್ಚುತ್ತಿದೆ.
ನವರಾತ್ರಿಯ ಸಂದರ್ಭದಲ್ಲಿ ಮಾನೆðಮಿ  ವೇಷ ಕಾಣದಿದ್ದರೆ ಅದೇನೋ ಕಳೆದುಕೊಂಡಂತೆ ಭಾಸವಾಗುತ್ತದೆ. ಧಾಮಿðಕ ನೆಲೆಯಲ್ಲಿ ಭಕ್ತಿಯಿಂದ ದೇವರ ಸೇವೆಯೆಂದು ತಿಳಿದು ಫಲಾಪೇಕ್ಷೆ ಇಲ್ಲದೆ ಜನರಿಗೆ ಮನೋರಂಜನೆ ಜೊತೆ ಸಂಪ್ರದಾಯವನ್ನು ಪಾಲಿಸಿಕೊಂಡು ಪೌರಾಣಿಕ ಹಿನ್ನಲೆಯನ್ನು ಉಳಿಸಿಕೊಂಡು ಬರುತ್ತಿರುವ ವೇಷಧಾರಿಗಳಿಗೆ ಸಲಾಮ್ ಮಾಡಲೇ ಬೇಕು.
  • ಚಂದ್ರಶೇಖರ್ ಎಸ್ ಅಂತರ

Share The Posts

Twitter Delicious Facebook Digg Stumbleupon Favorites More